ಸ್ಪೆಷಲ್ ಸ್ಟೋರಿ

ಬಿಗ್ ಬಾಸ್ ಮನೆಯಲ್ಲಿ ಧರ್ಮ ಕೀರ್ತಿರಾಜ್ ಅನುಷಾ ರೈ ದೂರ ದೂರ..

ನಾ ನಿನ್ನ ಮರೆಯಲಾರೆ ಎನ್ನುತ್ತಿದ್ದ ಧರ್ಮ ಮತ್ತು ಅನುಷಾ, ನಾನೊಂದು ತೀರಾ ನೀನೊಂದು ತೀರಾ ಅಂದಿದ್ದು ಯಾಕೆ..?

ಬಿಗ್ ಬಾಸ್ ಸೀಸನ್ 11 ರ ಸ್ಪರ್ಧಿಗಳಾದ ಧರ್ಮ ಕೀರ್ತಿರಾಜ್ ಹಾಗೂ ಅನುಷಾ ಜೋಡಿ ಮೋಡಿ ಮಾಡಿತ್ತು, ಬಿಗ್ ಮನೆಯಲ್ಲಿ ಇವರಿಬ್ಬರ ಮಧ್ಯೆ ಏನೋ ಇದೆ, ಏನೇನೋ ಇದೆ ಅಂತಾ ಮಾತಾಡಿಕೊಳ್ಳಲಾಗಿತ್ತು, ಅದರಂತೆ ಇವರಿಬ್ಬರೂ ಕೂಡಾ ಅನ್ಯೋನ್ಯತೆಯಿಂದ ಇದ್ರು, ಆದ್ರೆ ಈಗ ನೋಡಿ ಈ ಜೋಡಿಗಳ ಮಧ್ಯೆ ಸಣ್ಣದೊಂದು ಬಿರುಕು ಕಾಣಿಸಿಕೊಂಡಿದೆ, ಅಷ್ಟಕ್ಕೂ ಈ ಜೋಡಿಗಳು ಇಲ್ಲಿ ಈ ರೀತಿ ಕಿತ್ತಾಡಿಕೊಳ್ಳೋದಕ್ಕೆ ಅಸಲಿ ಕಾರಣವಾದ್ರೂ ಏನು..? ಅದುವೇ ನೇರ ನಾಮಿನೇಷನ್..ನಾಮಿನೇಷನ್ ಬಿಗ್ ಬಾಸ್ನಲ್ಲಿ ಸ್ಪರ್ಧಿಗಳಿಗೆ ತಲೆ ಬಿಸಿ ಅಂದ್ರೆ ನಾಮಿನೇಷನ್, ಒಬ್ಬೊಬ್ಬರೆ ಕನ್ಫೆಷನ್ ರೂಮಿಗೆ ಕರೆದು ತಾವು ಯಾರಿಗೆ ನಾಮಿನೇಟ್ ಮಾಡ್ತೀರಾ ಅಂತಾ ಕೇಳೋದು ಬೇರೆ, ಆದ್ರೆ ಈ ವಾರ ತಾವು ಇದ್ದಲ್ಲಿಯೇ ನಾಮಿನೇಟ್ ಮಾಡಿ ಎಂದು ಬಿಗ್ ಬಾಸ್ ಶಾಕ್ ಕೊಟ್ಟಿದ್ರು, ಈ ರೀತಿ ತಾವು ಇದ್ದಲ್ಲಿಯೇ ನಾಮಿನೇಟ್ ಮಾಡಿ ಅಂತಾ ಬಿಗ್‌ ಬಾಸ್‌ ಹೇಳೋಕೆ ಕಾರಣವೂ ಇದೆ..

ಬಿಗ್ ಮನೆಯಲ್ಲಿ ಬಣಗಳದ್ದೇ ಕಾರು ಬಾರು, ಬಿಗ್ ಮನೆ ಈಗ ಮನೆಯೊಂದು ನಾಲ್ಕು ಬಾಗಿಲಾಗಿದೆ, ಈ ವಾರ ಯಾರ್ಯಾರಿಗೆ ನಾಮಿನೇಟ್ ಮಾಡಬೇಕು ಅಂತೇಳಿ ಕಂಟೆಸ್ಟೆಂಟ್‌ಗಳು ಅವರಲ್ಲಿಯೇ ಮ್ಯಾಚ್ ಫಿಕ್ಸಿಂಗ್ ಮಾಡ್ಕೊಂಡಿರೋದು ಬಿಗ್ ಬಾಸ್ ಕೆಂಗಣ್ಣಿಗೆ ಗುರಿಯಾಗಿತ್ತು, ಆದ ಕಾರಣ ಬಿಗ್ ಮನೆಯಲ್ಲಿ ನೇರವಾಗಿ ತಾವು ಇದ್ದಲ್ಲಿಯೇ ನಾಮಿನೇಟ್ ಮಾಡಿ ಎಂದು ತಾಕೀತು ಮಾಡಿದ್ರು.. ಇದೇ ವೇಳೆ ಅನಿವಾರ್ಯ ಕಾರಣಗಳಿಂದ ಧರ್ಮ ಕೀರ್ತಿ, ಅನುಷಾ ಹಾಗೂ ಗೋಲ್ಡ್ ಸುರೇಶ್ ಹೆಸರನ್ನ ತೆಗೆದುಕೊಂಡು ತಾನು ಯಾಕೆ ಇವರನ್ನೇ ನಾಮಿನೇಟ್ ಮಾಡಿದೆ ಅಂತೇಳಿ ಕಾರಣ ಕೊಡ್ತಾರೆ, ಆದ್ರೆ ಇದ್ಯಾಕೋ ಅನುಷಾಗೆ ಸರಿ ಅನ್ನಿಸೋದಿಲ್ಲ, ನಾನು ಸರಿಯಾಗಿ ಆಡ್ತಿಲ್ಲ ಅಂತೀರಾ ನೀವು ಸರಿಯಾಗಿ ಆಡ್ತಿದ್ದೀರಾ ಅಂತೇಳಿ ಅನುಷಾ, ಧರ್ಮ ಕೀರ್ತಿರಾಜ್ಗೆ ಪ್ರಶ್ನೆ ಮಾಡಿದ್ರು,  ಇದಕ್ಕೆ ಉತ್ತರವಾಗಿ ಹೌದು ನಾನು ಸರಿಯಾಗಿ ಆಡ್ತಿಲ್ಲ ಅಂತಾನೇ ಹೋದವಾರ ಮನೆ ಮಂದಿ ನಾಲಾಯಕ್ ಪಟ್ಟ ಕೊಟ್ಟಿದ್ದು ಅಂತಾ ಕೌಂಟರ್ ಕೊಟ್ಟಿದ್ರು, ಈ ವಾದ ತಾರಕಕ್ಕೇರಿ, ಧರ್ಮ ಅದೆಷ್ಟೇ ಬಾರಿ ಅನುಷಾಗೆ ಸಮಾಧನ ಪಡಿಸೋದಕ್ಕೆ ಹೋದ್ರೂ ಅನುಷಾ ಮಾತ್ರ ಧರ್ಮನಿಂದ ಅಂತರ ಕಾಯ್ದುಕೊಂಡಿದ್ದಾರೆ..